ಗಣ್ಯರು ಯಾರು ?

ಪ್ರಿಯ ಸಖಿ,
ಅವರ ಕಾರು ಭರ್ರನೆ ಓಡುತ್ತಿದೆ. ರಸ್ತೆ ಮಧ್ಯದಲ್ಲಿ ಸೌದೆ ಹೊರೆ ಕಟ್ಟು ಬಿಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿಬಿಟ್ಟಿದೆ. ಇದನ್ನು ಕಂಡ ಅವರು ಗಕ್ಕನೆ ನಿಲ್ಲಿಸುತ್ತಾರೆ. ಕಾರಿನಿಂದಿಳಿದ ಅವರು ಆ ಮುದುಕನಿಗೆ ಸೌದೆಯನ್ನು ಆಯ್ದು ಹೊರೆ ಕಟ್ಟಲು ಸಹಾಯ ಮಾಡುತ್ತಾರೆ. ಆ ಹೊರೆಯನ್ನು ತಮ್ಮ ಡಿಕ್ಕಿಯಲ್ಲಿರಿಸಿ ಆ ಮುದುಕನನ್ನು ಅವನು ಬೇಡವೆನ್ನುತ್ತಿದ್ದರೂ ಕೇಳದೆ ಕಾರಿನಲ್ಲಿ ಕೂರಿಸಿಕೊಂಡು ಅವನ ಗಮ್ಯವನ್ನು ತಲುಪಿಸಿ ಅವರು ತಮ್ಮ ಕೆಲಸಕ್ಕೆ ಹೋಗುತ್ತಾರೆ.

ಅವರು ಆ ಊರಿನ ಅತ್ಯಂತ ಗಣ್ಯವ್ಯಕ್ತಿ ಸರ್ಕಾರದಲ್ಲಿ ಮಂತ್ರಿ ಪದವಿಯನ್ನು ನಿರ್ವಹಿಸುತ್ತಿರುವವರು. ಆದರೆ ಅವರಿಗೆ ಅದರ ಬಗ್ಗೆ ಯಾವುದೇ ಅಹಂಕಾರ, ಗರ್ವಗಳಿಲ್ಲ. ಸಭೆಯಿರಲಿ, ಸಮಾರಂಭವಿರಲಿ, ಮನೆಯಲ್ಲಾಗಲಿ ಅತ್ಯಂತ ಸಾಮಾನ್ಯ ಮನುಷ್ಯನಂತೆ ಅವರ ವೇಷಭೂಷಣ ಹಾಗೇ ಅವರ ಅವಶ್ಯಕತೆಗಳೂ ತೀರ ಅಲ್ಪವಾದವು. ಸರ್ಕಾರದಿಂದ ಮಂತ್ರಿಯೊಬ್ಬನಿಗೆ ದೊರೆಯುವ ಎಲ್ಲ ಸವಲತ್ತುಗಳನ್ನು ನಿರಾಕರಿಸಿದ್ದಾರೆ. ಜೊತೆಗೆ ದೀನದಲಿತರಿಗೆ ತಮ್ಮಿಂದಾಗುವ ಎಲ್ಲಾ ಸಹಾಯ, ಸಹಕಾರಗಳನ್ನು ಮಾಡುತ್ತಾ ಬಂದಿದ್ದಾರೆ. ತನ್ನದೆನ್ನುವ ಪ್ರತಿ ಪೈಸೆಯಲ್ಲಿಯೂ ಸಮಾಜದ ಋಣವಿದೆ ಎಂದು ನಂಬಿದವರಿವರು. ಊರಿನಿಂದ ಪೇಟೆಗೆ ಒಬ್ಬರೇ ಕಾರಿನಲ್ಲಿ ಹೊರಟರೂ ದಾರಿಯಲ್ಲಿ ಪೇಟೆಗೆ ಹೋಗಲು ಸಿಕ್ಕವರನ್ನೆಲ್ಲಾ ಕಾರಿನಲ್ಲಿ ತುಂಬಿಸಿಕೊಂಡು  ಪೇಟೆ ತಲುಪಿಸಿದರೇ ಇವರಿಗೆ ಸಮಾಧಾನ.

ಸಖಿ, ಇದ್ಯಾವುದೋ ಕನಸೋ, ಕಲ್ಪನೆಯ ಬಗ್ಗೆಯೋ ನಾನು ಹೇಳುತ್ತಿದ್ದೇನೆ ಎಂದು ನೀನು ಅಂದುಕೊಂಡಿದ್ದರೆ ಅದು ತಪ್ಪು. ಇಂತಹ ಸರಳ ಮಾನವೀಯ ವ್ಯಕ್ತಿ ನಿಜವಾಗಿಯೂ ಇದ್ದಾರೆ. ತನ್ನ ಸ್ಥಾನದ ಬಗ್ಗೆ ಗರ್ವ ಪಡದೇ ಊರಿನ ಎಲ್ಲರಿಗೂ ಬೇಕಾಗಿರುವ ಎಲ್ಲರ ಕಷ್ಟ ನೋವುಗಳಿಗೆ ಸ್ಪಂದಿಸುವ ಈ ವ್ಯಕ್ತಿ ತನ್ನ ಅಧಿಕಾರ, ಅಂತಸ್ತು, ವಿದ್ಯೆ ಸ್ಥಾನಮಾನದಿಂದಲ್ಲ. ಗಣ್ಯರಾಗಿರುವುದು, ತಮ್ಮ ಮಾನವೀಯ ಸ್ಪಂದನೆಗಳಿಂದ.

ಒಬ್ಬ ವ್ಯಕ್ತಿ ಗಣ್ಯನೆನಿಸಿಕೊಳ್ಳಲು ಅವನಿಗೆ ಹಿರಿದಾದ ಅಧಿಕಾರ, ಸ್ಥಾನ ಅಂತಸ್ತು, ಅಪರಿಮಿತ ವಿದ್ಯೆ, ಹಿರಿಯ ವಯಸ್ಸು ಇತ್ಯಾದಿಗಳನ್ನು ನಾವು ಮಾನದಂಡವಾಗಿ ಬಳಸುತ್ತೇವೆ. ಆದರೆ ಇವೆಲ್ಲಾ ಇದ್ದೂ ಅವನಿಗೆ ಇತರ ವ್ಯಕ್ತಿಗಳ ದುಃಖ, ನೋವುಗಳ ಬಗೆಗೆ ಸ್ಪಂದನೆಯಿಲ್ಲದಿದ್ದರೆ ಅವನು ಗಣ್ಯ ಅಥವಾ ಹಿರಿಯ ಹೇಗಾಗುತ್ತಾನೆ ? ತನ್ನ ಸ್ಥಾನ, ಅಂತಸ್ತು, ವಿದ್ಯೆ ವಯಸ್ಸುಗಳಿಗೆ ಇತರರು ಗೌರವಕೊಡಬೇಕೆಂದು ಬಯಸುವ ವ್ಯಕ್ತಿ ಅವುಗಳನ್ನು ಹೊಂದಿರುವುದರ ಬಗೆಗೆ ಗರ್ವಪಡದೇ ತನ್ನ ಸುತ್ತಲಿನವರ ನೋವು, ದುಃಖಗಳಿಗೆ ಸ್ಪಂದಿಸಿದಾಗ ಸಮಾಜದಲ್ಲಿ ಗೌರವವನ್ನು ಪಡೆಯುತ್ತಾನೆ. ಹಿರಿಯನೆನಿಸುತ್ತಾನೆ, ಗಣ್ಯನಾಗುತ್ತಾನೆ ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂಟ
Next post ನಿನ್ನೊಳಗನಿಣುಕಿದವರೆಷ್ಟು ಮಂದಿ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

cheap jordans|wholesale air max|wholesale jordans|wholesale jewelry|wholesale jerseys